<p>ಕೇರಲಾದ ಕೊಟ್ಟಿಯೂರಿನಲ್ಲಿ ಕರ್ನಾಟಕದ ನೆಲಮಂಗಳದ ಯುವಕ ಸಂತೋಷ್ ಕಡಲಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಯುವಕ ಮುಳುಗುತ್ತಿರುವ ವೀಡಿಯೋ ವೈರಲ್ ಆಗಿದ್ದು, ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕರ್ನಾಟಕದ ಹಲವು ಪ್ರವಾಸಿಗರು ಕೇರಳದ ಕೊಟ್ಟಿಯೂರಿಗೆ ತೆರಳಿದ್ದರು. ಕಡಲಿನಲ್ಲಿ ಮುಳುಗಿ ಮೃತಪಟ್ಟ ಕ್ಷಣಗಳು ಮೊಬೈಲ್ನಲ್ಲಿ ಸೆರೆಯಾಗಿವೆ.</p>
