<p>ಬೆಂಗಳೂರಿನಲ್ಲಿ ಪ್ರೀತಿ ನಿರಾಕರಿಸಿದ ಯುವತಿ ಅಮೃತಾ ಅವರಿಗೆ ಪ್ರಿಯಕರನ ತಮ್ಮ ಚಾಕುವಿನಿಂದ ಇರಿದ ಭೀಕರ ಘಟನೆ ನಡೆದಿದೆ. ಧನುಷ್ ಎಂಬ ಯುವಕ ಮದುವೆಯಾಗಿ ಡಿವೋರ್ಸ್ ಪಡೆದಿದ್ದ ಮತ್ತು ಮಗುವಿದ್ದ ವಿಷಯ ತಿಳಿದ ಬಳಿಕ ಅಮೃತಾ ಆತನಿಂದ ದೂರ ಸರಿದಿದ್ದರು. ಇದರಿಂದ ಕೋಪಗೊಂಡ ಧನುಷ್ ಮತ್ತು ಆತನ ತಮ್ಮ ಸೇರಿ ರಸ್ತೆಯಲ್ಲಿ ಅಮೃತಾ ಅವರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಅಮೃತಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಘಟನೆ ಸಮಾಜದಲ್ಲಿ ತೀವ್ರ ಆಕ್ರೋಶ ಮೂಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.</p>
